ಸಾರಸ್ವತ್ ಬ್ಯಾಂಕ್ ನೇಮಕಾತಿ | ಬೆಂಗಳೂರು, ದಾವಣಗೆರೆ, ಮಂಗಳೂರು, ತುಮಕೂರು ಶಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ Saraswat Bank Recruitment 2024

WhatsApp
Telegram
Facebook
Twitter
LinkedIn

Saraswat Bank Recruitment 2024 : ದೇಶದ ಪ್ರತಿಷ್ಟಿತ ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾಗಿರುವ ಸಾರಸ್ವತ್ ಬ್ಯಾಂಕ್‌ನ (Saraswat Bank) ಕರ್ನಾಟಕ ಶಾಲೆಯ ವಿವಿಧ ಜಿಲ್ಲೆಗಳ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಾರಸ್ವತ್ ಬ್ಯಾಂಕ್ ದೇಶಾದ್ಯಂತ 302 ಶಾಖೆಗಳನ್ನು ಹೊಂದಿದ್ದು; ಸದ್ಯ ಕರ್ನಾಟಕದ ಬೆಂಗಳೂರು, ಮಂಗಳೂರು, ತುಮಕೂರು ಹಾಗೂ ದಾವಣಗೆರೆ ಶಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.

ಹುದ್ದೆಗಳ ವಿವರ
  • ಬ್ರ‍್ಯಾಂಚ್ ಮ್ಯಾನೇಜರ್
  • ಬ್ರ‍್ಯಾಂಚ್ ಡೆಪ್ಯೂಟಿ ಮ್ಯಾನೇಜರ್ಸ್
  • ರಿಕವರಿ ಅಫೀಶಿಯಲ್ಸ್
  • ಕ್ರೆಡಿಟ್ ಅಡ್ಮಿನಿಸ್ಟ್ರೇಷನ್ ಅಫೀಶಿಯಲ್ಸ್
  • ರಿಲೇಶನ್ಶಿಪ್ ಮ್ಯಾನೇಜರ್
  • ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್
  • ಅಪ್ರೆಂಟಿಸ್ ಟ್ರೈನಿ
  • ಕ್ರೆಡಿಟ್ ಮೌಲ್ಯಮಾಪನ ಅಫೀಶಿಯಲ್ಸ್

ಬ್ರ‍್ಯಾಂಚ್ ಮ್ಯಾನೇಜರ್

ಬೆಂಗಳೂರು ಹಾಗೂ ಮಂಗಳೂರು ಶಾಖೆಗಳಲ್ಲಿ ಬ್ರ‍್ಯಾಂಚ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಖಾಸಗಿ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ ಅಥವಾ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನಲ್ಲಿ ಶಾಖಾ ವ್ಯವಸ್ಥಾಪಕರಾಗಿ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಬ್ರ‍್ಯಾಂಚ್ ಡೆಪ್ಯೂಟಿ ಮ್ಯಾನೇಜರ್ಸ್

ಬೆಂಗಳೂರು, ಮಂಗಳೂರು ಹಾಗೂ ದಾವಣಗೆರೆ ಶಾಖೆಗಳಲ್ಲಿ ಈ ಹುದ್ದೆಗಳಿದ್ದು; ಬ್ಯಾಂಕಿಂಗ್ ಸೇವೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿದಾರರು ಗ್ರಾಹಕ ಸೇವೆ, ಮಾರಾಟ, ನಿಯಮಗಳು ಮತ್ತು ನೀತಿಗಳ ಅನುಸರಣೆ ಸೇರಿದಂತೆ ಮೇಲ್ವಿಚಾರಣಾ ಕೇಡರ್‌ನಲ್ಲಿ ಶಾಖೆಯ ಕಾರ್ಯಾಚರಣೆಗಳನ್ನು ನಿರ್ವಹಿಸಿರಬೇಕು.

ರಿಕವರಿ ಅಫೀಶಿಯಲ್ಸ್

ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; ಖಾಸಗಿ ಬ್ಯಾಂಕುಗಳಲ್ಲಿ ರಿಕವರಿ ವಿಭಾಗದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು. ಕಾರ್ಪೊರೇಟ್ / ಎಸ್‌ಎಂಇ ಚೇತರಿಕೆಯ ಕಾರ್ಯವಿಧಾನಗಳನ್ನು ನಿರ್ವಹಿಸುವಲ್ಲಿ ಅನುಭವವನ್ನು ಹೊಂದಿರಬೇಕು.

ಕ್ರೆಡಿಟ್ ಅಡ್ಮಿನಿಸ್ಟ್ರೇಷನ್ ಅಫೀಶಿಯಲ್ಸ್

ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; ಬಿಇ / ಬಿಎಸ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಕ್ರೆಡಿಟ್ ವಲಯದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.

ರಿಲೇಶನ್ಶಿಪ್ ಮ್ಯಾನೇಜರ್

ಬೆಂಗಳೂರು ಮತ್ತು ಮಂಗಳೂರು ಶಾಖೆಗಳಲ್ಲಿ ಈ ಹುದ್ದೆಗಳಿದ್ದು; ಸಿಎ/ ಸಿಎಂಎ ಪಾಸಾದವರು ಅರ್ಜಿ ಸಲ್ಲಿಸಬಹುದು. ಕ್ರೆಡಿಟ್ ಪ್ರಸ್ತಾವನೆಗಳ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮತ್ತು ಕ್ರೆಡಿಟ್ ಸಂಬಂಧಗಳನ್ನು ನಿರ್ವಹಿಸುವಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಬ್ಯುಸಿನೆಸ್ ಡೆವಲಪ್ಮೆಂಟ್ ಆಫೀಸರ್

ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; 30ನೇ ಸೆಪ್ಟೆಂಬರ್ 2024ರಂತೆ 27 ವರ್ಷಕ್ಕಿಂತ ಕಡಿಮೆ ವಯೋಮಿತಿಯವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಮಾರ್ಕೆಟಿಂಗ್ ವಿಭಾಗದಲ್ಲಿ ಅನುಭವ ಹೊಂದಿರಬೇಕು.

ಅಪ್ರೆಂಟಿಸ್ ಟ್ರೈನಿ

ಬೆಂಗಳೂರು, ಮಂಗಳೂರು, ದಾವಣಗೆರೆ ಹಾಗೂ ತುಮಕೂರು ಶಾಖೆಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು; 30ನೇ ಸೆಪ್ಟೆಂಬರ್ 2024ರಂತೆ 27 ವರ್ಷಕ್ಕಿಂತ ಕಡಿಮೆ ವಯೋಮಿತಿಯವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ, ಬಿ.ಎಸ್ಸಿ ಪದವಿ ಹೊಂದಿರಬೇಕು.

ಕ್ರೆಡಿಟ್ ಮೌಲ್ಯಮಾಪನ ಅಫೀಶಿಯಲ್ಸ್

ಬೆಂಗಳೂರು ಶಾಖೆಯಲ್ಲಿ ಈ ಹುದ್ದೆ ಖಾಲಿ ಇದ್ದು; ಇಂಜಿನಿಯರ್‌ಗಳು / ವಿಜ್ಞಾನ ಪದವೀಧರರು ಹಣಕಾಸು ಜ್ಷಾನ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ

ಸಾರಸ್ವತ್ ಬ್ಯಾಂಕ್ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಶುಲಕ ಪಾವತಿಸಬಹುದು. ಲಿಖಿತ ಪರೀಕ್ಷೆ / ಸಂದರ್ಶನ ನಡೆಸುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
    09-10-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
    22-10-2024

ಅಧಿಸೂಚನೆ : Download
ಅರ್ಜಿ ಸಲ್ಲಿಕೆ ಲಿಂಕ್ : Apply now

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon