Jobs

Kendriya Vidyalaya-ಧಾರವಾಡದ ಕೇಂದ್ರೀಯ ವಿದ್ಯಾಲಯ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Kendriya Vidyalaya-ಧಾರವಾಡದ ಕೇಂದ್ರೀಯ ವಿದ್ಯಾಲಯ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಧಾರವಾಡದ ಪ್ರಧಾನಮಂತ್ರಿ ಶ್ರೀ ಕೇಂದ್ರಿಯ ವಿದ್ಯಾಲಯದಲ್ಲಿ (Pradhanamantri Sri Kendriya Vidyalaya, Dharwad) ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.


2025-26ರ ಶೈಕ್ಷಣಿಕ ಅವಧಿಗೆ ಅರೆಕಾಲಿಕ ಗುತ್ತಿಗೆ ಆಧಾರಿತ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು; ಆಸಕ್ತ ಅಭ್ಯರ್ಥಿಗಳು ಮಾರ್ಚ್ 06, 2025ರಂದು ಸಂದರ್ಶನಕ್ಕೆ ಹಾಜರಾಗುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?


ವಿಷಯವಾರು ಹುದ್ದೆಗಳ ವಿವರ : ಪಿಜಿಟಿ - ಇಂಗ್ಲೀಷ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ ಶಿಕ್ಷಕರು ಹುದ್ದೆಗಳು. ಟಿಜಿಟಿ - ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಂಸ್ಕೃತ ಶಿಕ್ಷಕರ ಹುದ್ದೆಗಳು. ಪ್ರಾಥಮಿಕ ಮತ್ತು ಮಾಧ್ಯಮಿಕ ಕಂಪ್ಯೂಟರ್ ಬೋಧಕರು ಹಾಗೂ ಪಿಆರ್‌ಟಿ/ಟಿಜಿಟಿ - ಕನ್ನಡ, ಬಾಲವಾಟಿಕೆ ಶಿಕ್ಷಕರು, ಕ್ರೀಡಾ ತರಬೇತಿದಾರರು, ಯೋಗ ತರಬೇತಿಗಾರರು, ಟಿಜಿಟಿ- ಕುಶಲ ಶಿಕ್ಷಕರು (ಕಲಾ ಶಿಕ್ಷಣ), ನರ್ಸ್, ಶೈಕ್ಷಣಿಕ ಸಲಹೆಗಾರರು, ವಿಶೇಷ ಶಿಕ್ಷಕರು ಹುದ್ದೆಗಳು.


ಸ್ವ-ಧೃಢೀಕರಿಸಿದ ಸೂಕ್ತ ದಾಖಲಾತಿಗಳನ್ನು ಭರ್ತಿ ಮಾಡಿದ ಸ್ವವಿವರದ (ಬಯೋಡೆಟಾ) ದಾಖಲಾತಿಗಳನ್ನು ಸಂದರ್ಶನದ ಸಮಯದಲ್ಲಿ ಸಲ್ಲಿಸಬೇಕು. ಸ್ವವಿವರದ ನಮೂನೆಯನ್ನು ಶಾಲೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.


ಅರ್ಜಿ ಸಲ್ಲಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಶಾಲಾ ವೆಬ್‌ಸೈಟ್’ನ ಪ್ರಕಟಣೆಯಲ್ಲಿರುವ ನೊಂದಣಿ ಲಿಂಕ್ ಮೂಲಕ 05-03-2025ರ ಒಳಗಾಗಿ ನೊಂದಾಯಿಸಿಕೊಳ್ಳಬೇಕು. 


ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ...


ನೇಮಕಾತಿ ಸಂದರ್ಶನ ನಡೆಯುವ ಸ್ಥಳ: ಪ್ರಧಾನಮಂತ್ರಿ ಶ್ರೀ ಕೇಂದ್ರಿಯ ವಿದ್ಯಾಲಯ, ಸೋಮೇಶ್ವರ ದೇವಸ್ಥಾನ ರಸ್ತೆ, ಧಾರವಾಡ-580002 (ಕರ್ನಾಟಕ), ದೂರವಾಣಿ: 836 2440110


ನೇಮಕಾತಿ ಸಂದರ್ಶನದ ದಿನಾಂಕ: 06-03-2025


ಕೆಳಗೆ ನೀಡಿರುವ ಶಾಲೆಯ ವೆಬ್‌ಸೈಟ್ ಲಿಂಕ್ ಬಳಸಿಕೊಂಡು ಕೇಂದ್ರಿಯ ವಿದ್ಯಾಲಯದ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂದರ್ಶನದ ಅರ್ಹತಾ ಮಾನದಂಡಗಳು ಮತ್ತು ಇತರ ವಿವರಗಳನ್ನು ತಿಳಿಯಲು ಪ್ರಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಧಿಸೂಚನೆ: Download

ಶಾಲಾ ವೆಬ್‌ಸೈಟ್ ಲಿಂಕ್: Click Here


ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ